- Monday 18 Feb 2019
-
UPDATED : IST
ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ಶ್ರಮ: ರಾಜೇಶ್ ನಾೖಕ್
Team Udayavani, Feb 7, 2019, 9:06 AM IST

ಬಂಟ್ವಾಳ: ನಗರ ಪ್ರದೇಶಗಳ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳನ್ನೂ ಅಭಿವೃದ್ಧಿಪಡಿಸುವುದರ ಜತೆಗೆ ಪ್ರತಿ ಮನೆಗೆ ಉಜ್ವಲ, ಆಯುಷ್ಮಾನ್ ಭಾರತ ಮತ್ತಿತರ ಜನಪ್ರಿಯ ಯೋಜನೆಗಳನ್ನು ತಲುಪಿಸುವ ಮೂಲಕ ಮಧ್ಯಮವರ್ಗದ ಜನರನ್ನು ಮೇಲೆತ್ತಿ ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಅರಳ ಗ್ರಾ.ಪಂ. ವ್ಯಾಪ್ತಿಯ ವಿವಿಧೆೆಡೆ ಅನುಷ್ಠಾನಗೊಂಡ ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ತುಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮ ಪೂರ್ವದಲ್ಲಿ ದೆಂಬುಡೆ ಎಂಬಲ್ಲಿನ ವಿದ್ಯುತ್ ಪರಿವರ್ತಕ, 6 ಲಕ್ಷ ರೂ. ವೆಚ್ಚದ ಕುಟ್ಟಿಕಳ ನರೇಗಾ ರಸ್ತೆ, 1.25 ಲಕ್ಷ ರೂ. ವೆಚ್ಚದ ಸಂಗಬೆಟ್ಟು ಸಂಪರ್ಕದ – ತಾರಿಪಡ್ಪು ಕುಡಿಯುವ ನೀರಿನ ಟ್ಯಾಂಕ್, 7.25 ಲಕ್ಷ ರೂ. ವೆಚ್ಚದ ಅರಳ ಕಲ್ಲೇರಿ ಪ್ರಾಥಮಿಕ ಶಾಲಾ ಕೊಠಡಿ ಯನ್ನು ಶಾಸಕರು ಉದ್ಘಾಟಿಸಿದರು.
ಸೌಲಭ್ಯ ವಿತರಣೆ
ಅರ್ಹ 80 ಮಂದಿ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಕಿಟ್, ಅಂಗವಿಕಲರಿಗೆ ಚೆಕ್, 16 ಮಂದಿಗೆ 94 ಸಿ ಹಕ್ಕುಪತ್ರ ವಿತರಿಸಿದರು.
ಸೇತುವೆ ವೀಕ್ಷಣೆ
ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಮತ್ತು ಅರಳ-ಕಲ್ಲೊಟ್ಟೆಗೆ ಶಾಸಕರು ಭೇಟಿ ನೀಡಿ ಶಿಥಿಲಗೊಂಡ ಸೇತುವೆ ವೀಕ್ಷಿಸಿದರು.
ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಎಂ.ಬಿ. ಆಶ್ರಫ್, ಲಕ್ಷ್ಮೀಧರ ಪೂಜಾರಿ, ರಂಜನಿ, ಜೈನಾಬ್, ಜುಲೇಕಾ, ಪ್ರಮುಖರಾದ ನಂದರಾಮ ರೈ, ರಂಜನ್ ಕುಮಾರ್ ಅರಳ, ಪಿಡಿಒ ಉತ್ತಮ್ ಬನ್ಸೊಡೆ, ಕಾರ್ಯದರ್ಶಿ ಉದಯ ಸಿದ್ಧಕಟ್ಟೆ, ಕಂದಾಯ ನಿರೀಕ್ಷಕ ನವೀನ ಕುಮಾರ್, ಗ್ರಾಮಕರಣಿಕ ಅಮೃತಾಂಶು ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಸದಸ್ಯ ಡೊಂಬಯ ಬಿ. ಅರಳ ನಿರೂಪಿಸಿ, ವಂದಿಸಿದರು.
ಶಿಲಾನ್ಯಾಸ
ಅರಳ ಗ್ರಾಮ ಪಂಚಾಯತ್ 20 ಲಕ್ಷ ರೂ. ವೆಚ್ಚದ ಮೇಲಂತಸ್ತಿನ ಕಟ್ಟಡ, 5 ಲಕ್ಷ ರೂ. ವೆಚ್ಚದ ಪಾಚಿಲೋಡಿ-ಸಂಗಬೆಟ್ಟು ಕಾಂಕ್ರೀಟು ರಸ್ತೆ, 10 ಲಕ್ಷ ರೂ. ವೆಚ್ಚದ ಅರಳ ಕೋಟೆ ಕಾಂಕ್ರೀಟು ರಸ್ತೆ ಕಾಮಗಾರಿಗೆ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ಸುಳ್ಯ : ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ...
-
ಐಬಾಲ್ ಸ್ಲೈಡ್ ಎಲನ್ 3x32 ಟ್ಯಾಬ್ಲೆಟ್ನ್ನು ಕಳೆದ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು 10.10 ಇಂಚ್ನ ಡಿಸ್ಪ್ಲೇ ಹೊಂದಿದ್ದು 800x1280 ಪಿಕ್ಸೆಲ್ ರೆಸೆಲ್ಯೂಷನ್ನ್ನು...
-
ಪಾರ್ಟಿ ಇರಲಿ, ಇನ್ಯಾವುದೇ ಸಮಾರಂಭಗಳಿರಲಿ ಮಹಿಳೆಯರ ಸೀರೆ, ಮೇಕಪ್ ಸೇರಿದಂತೆ ಇನ್ನಿತರ ಫ್ಯಾಶನ್ಗೆ ಮತ್ತಷ್ಟು ಕಳೆಯನ್ನು ತಂದುಕೊಡುವ ವಸ್ತು ಬ್ಯಾಗ್....
-
ಎಲ್ಲ್ಲ ವಾಹನಗಳಲ್ಲೂ ಶಾಕ್ ಇದೆ. ಏರು ತಗ್ಗು, ಹೊಂಡ ಗುಂಡಿಯ ರಸ್ತೆಗಳಲ್ಲೂ ಸುಗಮ ಸವಾರಿಗೆ ಇದು ಅನುಕೂಲ ಮಾಡಿಕೊಡುತ್ತದೆ. ಕಾರು ಗಳಲ್ಲಿ ನಾಲ್ಕೂ ಚಕ್ರ ಗಳಿಗೆ...
-
ಕೇಂದ್ರ ಸರಕಾರದ ಈ ಬಾರಿಯ ಬಜೆಟ್ನಲ್ಲಿ ಗ್ರಾಮೀಣ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದು, ಇದರ ನೇರ ಪರಿಣಾಮ ಎಲೆಕ್ಟ್ರಾನಿಕ್...
ಹೊಸ ಸೇರ್ಪಡೆ
-
ಪಟ್ನಾ: ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ಬಿಹಾರ ರಾಜ್ಯದ ಇಬ್ಬರು ಸಿ.ಆರ್.ಪಿ.ಎಫ್. ಯೋಧರೂ ಸೇರಿದ್ದಾರೆ. ರತನ್ ಕುಮಾರ್...
-
ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ...
-
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಶತಪ್ರತಿಶತ ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ...
-
ಜಮೈಕಾ: ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಪ್ರತಿಭೆ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ. ಇದೇ ವರ್ಷದ...
-
ನವದೆಹಲಿ: ಮಾಜೀ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ಅವರು ಮತ್ತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮತ್ತೆ ‘ಭಾರತೀಯ ಜೂಟಿ ಪಾರ್ಟಿ’ (ಭಾರತೀಯ...
-
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ವೇದಿಕೆಯೊಂದರ ಚಪ್ಪರ ಕುಸಿದು ಬಿದ್ದು ಹಲವರು ಗಾಯಗೊಂಡಿರುವ...